ಲೇಖನದ ಈ ಶೀರ್ಷಿಕೆಯೇ ನಿಮ್ಮಲ್ಲಿ
(ಕೆಲವರಿಗಾದರೂ) ಕುತೂಹಲ ಹುಟ್ಟಿಸಬಹುದು!!! ದೇಶ ದೇಶಗಳ ನಡುವಣ ವ್ಯಾಪಾರ ವಹಿವಾಟು
ಹಡಗು/ಬಂದರುಗಳ ಮೂಲಕ ಅಥವ ಟ್ರಕ್/ರೈಲು/ಚೆಕ್ ಪೋಸ್ಟ್ ಗಳ ಮೂಲಕ ಅಥವಾ ವಿಮಾನಗಳ ಮೂಲಕ
ನಡೆಯುತ್ತದೆಂಬುದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಆದರೆ – ದೇಶ ದೇಶದ ಮದ್ಯದ ಗಡಿಯಲ್ಲಿ - ನೆಲದಿಂದ
ಅರವತ್ತು ಎಪ್ಪತ್ತು ಅಡಿಗಳಾಳದಲ್ಲಿ – ಸ್ವಲ್ಪ ನಡು ಬಗ್ಗಿಸಿ ಹೋಗಬಹುದಾದ ದೂಳು ತುಂಬಿದ
ಅರೆಗತ್ತಲೆಯ ಸುರಂಗಗಳ ಮೂಲಕ - ಮುಖಕ್ಕೊಂದು ಬಟ್ಟೆ ಸುತ್ತಿಕೊಂಡು – ವಾರದಲ್ಲಿ ಆರುದಿನ ಹಗಲೂ
ರಾತ್ರಿ (ಬಹುಶಃ ಶುಕ್ರವಾರ ಅಲ್ಲದಿದ್ದರೆ ನೀವೀಗ ಈ ಲೇಖನ ಓದುತ್ತಿರುವ ಸಮಯದಲ್ಲೂ)
ನಡೆಯುತ್ತಿರುವ – ವಾರ್ಷಿಕ ಕೆಲವು ದಶಲಕ್ಷ ಡಾಲರುಗಳ – ಸಾಮಾನು ಸರಂಜಾಮುಗಳ ವ್ಯಾಪಾರ ವಹಿವಾಟಿನ
ಬಗ್ಗೆ ನೀವು ಕೇಳಿರುವ ಸಂಭವ ಕಡಿಮೆ. (ಬಹುಶಃ) ಈ ವ್ಯವಸ್ತೆ ಪ್ರಪಂಚದ ಅತಿದೊಡ್ಡ ಕಳ್ಳಸಾಗಾಣಿಕಾ
ವ್ಯವಸ್ತೆ!!! ಈ ಆಶ್ಚರ್ಯಕರ, ಕುತೂಹಲಬರಿತ ಹಾಗೂ ಸ್ವಾರಸ್ಯಕರ ವಿಷಯದ ಬಗ್ಗೆ ನಿಮಗೆ ತಿಳಿಸುವುದೇ ಈ ಬ್ಲಾಗ್
ಬರಹದ ಉದ್ದೇಶ. ಆದರೆ ಅದಕ್ಕೆ ಪೂರ್ವಭಾವಿಯಾಗಿ ಚರಿತ್ರೆಯ ಪುಟಗಳಲ್ಲಿ ಹಿಮ್ಮುಖ ಪಯಣ.
ಆದರೆ ಎರಡನೇ ಮಹಾಯುದ್ದದ ನಂತರ ನಡೆಯುವ
ಕೆಲವೊಂದು ಘಟನೆಗಳು ಮಧ್ಯಪ್ರಾಚ್ಯದ (Middle east) ಚಿತ್ರಣವನ್ನೇ ಬದಲಾಯಿಸುತ್ತದೆ. ಯುರೋಪಿನಲ್ಲಿ ಹಿಟ್ಲರ್ ನ ಜನಾಂಗೀಯ
ದ್ವೇಷಕ್ಕೆ ಬಲಿಯಾಗಿ ಉಳಿದ ಯಹೂದಿಗಳು – ಸಾವಿರ ವರ್ಷದ ಕೆಳಗೆ ತಾವು ಬಿಡಬೇಕಾಗಿ ಬಂದ – ದೇವರೇ
ಯಹೂದಿಗಳಿಗೆ ನೀಡಿದ ಭೂಬಾಗ – ಇಸ್ರೇಲ್ ನಲ್ಲಿ ನೆಲೆಕಂಡುಕೊಳ್ಳುವ ನಿರ್ದಾರ
ತೆಗೆದುಕೊಳ್ಳುತ್ತಾರೆ. ಯುದ್ದದಲ್ಲಿ ಗೆದ್ದ ರಾಷ್ಟ್ರಗಳಾದ ಅಮೇರಿಕ ಹಾಗು ಬ್ರಿಟನ್ ಎಲ್ಲಾ
ರೀತಿಯ ಸಹಕಾರ ನೀಡುತ್ತವೆ. ಪ್ರಪಂಚಾದ್ಯಂತ ನೆಲಸಿರುವ ಯಹೂದಿಗಳೂ ಇಸ್ರೇಲಿನೆಡೆ
ಬರಲಾರಂಬಿಸುತ್ತಾರೆ. ಹೊಸ ವಸಾಹತುಗಳು ಕಟ್ಟಲ್ಪಡುತ್ತವೆ. ಒಂದೂವರೆ ಸಾವಿರ ವರ್ಷಗಳ ನಂತರ
ಯಹೂದಿಗಳ ಹೊಸ ದೇಶ ಇಸ್ರೇಲ್ ಮತ್ತೆ ಅದೇ ಜಾಗದಲ್ಲಿ ತಲೆಯೆತ್ತುತ್ತದೆ!!!! ಆದರೆ ಆ ಕನಸು ನನಸಾಗಲು
ಅವರು ಪಟ್ಟ (ಹಾಗೂ ಪಡುತ್ತಿರುವ) ಕಷ್ಟಗಳು ಒಂದೆರೆಡಲ್ಲ.
ಯಹೂದಿಗಳು
ಪ್ರಪಂಚಾದ್ಯಂತದಿಂದ ವಲಸೆಬಂದು – ಒಂದೂವರೆ ಸಾವಿರ ವರ್ಷಗಳ ಹಿಂದೆ ನಾವಿದ್ದ ಪ್ರದೇಶವೆಂದು -
ಇಸ್ರೇಲ್ ನಲ್ಲಿ ತುಂಬಿಕೊಳ್ಳುತ್ತಿದ್ದಂತೆ – ಅನೇಕ ತಲೆಮಾರುಗಳಿಂದ ಆ ಜಾಗದಲ್ಲಿ ನೆಲೆಸಿದ್ದ
ಪ್ಯಾಲಸ್ತೀನಿಯರು ಮೂಲೆಗುಂಪಾಗುತ್ತಾರೆ!!! ಲಕ್ಷಾಂತರ ಪ್ಯಾಲಸ್ತೀನಿಯರು ದೇಶಭ್ರಷ್ಟರಾಗಿ ಪಕ್ಕದ
ದೇಶಗಳಿಗೆ ವಲಸೆಹೋಗಬೇಕಾಗುತ್ತದೆ. ಸಂಪೂರ್ಣ ಇಸ್ರೇಲ್ ಯಹೂದಿಗಳ ಕೈವಶವಾಗಿ ಪ್ಯಾಲಸ್ತೀನಿಯರು
ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ಪ್ರದೇಶಕ್ಕೆ ತಳ್ಳಲ್ಪಡುತ್ತಾರೆ. ಸಹಜವಾಗೇ ಮುಸ್ಲಿಂ
ಜಗತ್ತಲ್ಲಿ ಇಸ್ರೇಲ್ ವಿರುದ್ದ ಅಸಮದಾನ ಹೆಡೆಯೆತ್ತುತ್ತದೆ. (ಭಾರತವೂ ಮುಸ್ಲಿಂಮರ ತಾಳಕ್ಕೆ
ಕುಣಿಯುವ ನಮ್ಮ ರಾಷ್ಟ್ರನಾಯಕರಿಂದಾಗಿ ಅನೇಕ ದಶಕಗಳ ಕಾಲ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂದ
ಕಡಿದುಕೊಂಡಿತ್ತು. ಡೇವಿಸ್ ಕಪ್ ಟೆನಿಸ್ ಫೈನಲ್ ನಲ್ಲಿ ಎದುರಾಳಿ ಇಸ್ರೇಲ್ ಆದಾಗ ಆಡದೆ
ಬಿಟ್ಟುಕೊಟ್ಟಿತ್ತು!!!). ಪ್ಯಾಲಸ್ತೀನಿಯರ ಉಗ್ರಗಾಮಿ ಸಂಘಟನೆಗಳು ಹುಟ್ಟಿಕೊಳ್ಳುತ್ತದೆ.
ಸುತ್ತಮುತ್ತಲಿನ ಮುಸ್ಲಿಂ ದೇಶಗಳೊಡನೆ ಆಗತಾನೆ ಹುಟ್ಟಿದ ಇಸ್ರೇಲ್ ಯುದ್ದಮಾಡಬೇಕಾಗುತ್ತದೆ. ತಾನು
ವಶಪಡಿಸಿಕೊಂಡ ಭೂಭಾಗದಲ್ಲಿ ಒಂದಿಷ್ಟನ್ನು ಈಜಿಪ್ಟ್ ಗೆ ಬಿಟ್ಟುಕೊಟ್ಟು ಶಾಂತಿ ಒಪ್ಪಂದ
ಮಾಡಿಕೊಳ್ಳುವ ಇಸ್ರೇಲ್ ತನ್ನ ಸಮರ್ಥ ಮಿಲಿಟರಿ ಶಕ್ತಿಯಿಂದ ಇತರ ಮುಸ್ಲಿಂ ದೇಶಗಳನ್ನು
ಎದುರಿಸುತ್ತದೆ!!! ಮಧ್ಯಪ್ರಾಚ್ಯ ಬೆಂಕಿಯ ಕುಲುಮೆಯಾಗುತ್ತದೆ. ವಿಶ್ವಸಂಸ್ಥೆಯ
ಮದ್ಯಪ್ರವೇಶದೊಂದಿಗೆ ಶಾಂತಿಮಾತುಕತೆ ನಡೆದು ಆ ಪ್ರದೇಶದಲ್ಲಿ ಯಹೂದಿಯರಿಗೆ ಇಸ್ರೇಲ್ ಹಾಗೂ ಅರಬ್
ಮುಸ್ಲಿಮ್ಮರಿಗೆ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಒಳಗೊಂಡ ಪ್ಯಾಲಸ್ತೈನ್ ಎಂಬ ಎರಡು
ದೇಶಗಳನ್ನು ನಿರ್ಮಿಸುವ ಪ್ರಸ್ತಾಪವಾಗುತ್ತದೆ. ಯಹೂದಿಗಳು ಕೂಡಲೇ ಒಪ್ಪಿಕೊಳ್ಳುತ್ತಾರೆ. ಆದರೆ
ಅರಾಫಾತ್ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದ ಪ್ಯಾಲಸ್ತೀನಿಯರು ಕೂಡಲೇ ಅಲ್ಲದಿದ್ದರೂ
ಅನಂತರದಲ್ಲಿ ಒಪ್ಪಿಕೊಳ್ಳುವ ಅನಿವಾರ್ಯತೆ ಬರುತ್ತದೆ.
ಆ ನೆಲದಲ್ಲಿ ಎರಡು ದೇಶಗಳು ನಿರ್ಮಾಣವಾದರೂ ಶಾಂತಿ
ಮರೀಚಿಕೆಯಾಗುತ್ತದೆ. ಗಾಜಾ ಪಟ್ಟಿ ಹಾಗೂ ವೆಸ್ಟ್ ಬ್ಯಾಂಕ್ ನ ಮುಸ್ಲಿಂ ಯುವಕರು ಇಸ್ರೇಲ್ ಮೇಲೆ
ಆಗಾಗ್ಯೆ ಆತ್ಮಾಹುತಿ ಭಯೋತ್ಪಾದಕದಾಳಿ ಮಾಡುತ್ತಲೇ ಇರುತ್ತಾರೆ. ಇಸ್ರೇಲ್ ತಕ್ಕ ಪ್ರತ್ಯುತ್ತರ –
ಉಗ್ರಗಾಮಿ ನೆಲೆಗಳ ಮೇಲೆ ರಾಕೆಟ್(ಡ್ರೋಣ್) ದಾಳಿ ಮಾಡಿ ಸೆದೆಬಡಿಯುವ ಮೂಲಕ – ನೀಡುತ್ತದೆ.
(ಭಾರತದಲ್ಲಿ – ಇಂತಹ ದಾಳಿಗಳಾದಾಗ – “ಅಂತಹ ದಾಳಿಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತದೆ” –
ಎಂದು ನಮ್ಮ ನಾಯಕರು ಸದಾ ಹೇಳಿಕೆ ಕೊಡುತ್ತಾರೆ!!!). ಬಾಂಬ್ ದಾಳಿ ಹಾಗೂ ರಾಕೆಟ್ ದಾಳಿಗಳಲ್ಲಿ
ಉದ್ದೇಶಿತ ಜನರ ಜೊತೆ ಎಷ್ಟೋಸಲ ಅಮಾಯಕರೂ ಬಲಿಯಾಗುತ್ತಾರೆ. (ಇತ್ತೀಚೆಗೆ ಕೆಲವು ತಿಂಗಳುಗಳ
ಹಿಂದಷ್ಟೇ ಇಸ್ರೇಲ್ ರಾಕೆಟ್ ದಾಳಿಯಿಂದ ಸತ್ತ ತನ್ನ ಒಂದುವರ್ಷದ ಕಂದಮ್ಮನನ್ನು ಕೈಯ್ಯಲ್ಲಿ
ಹಿಡಿದುಕೊಂಡು ರೋದಿಸುತ್ತಿದ್ದ ಪ್ಯಾಲಸ್ತೈನ್ ಬಿಬಿಸಿ ವರದಿಗಾರನ ಫೋಟೋ ನೀವು ನೋಡಿರಬಹುದು).
ಆತ್ಮಹತ್ಯಾದಾಳಿ ತಡೆಯಲು ಇಸ್ರೇಲ್ ಜೆರುಸಲೇಮ್ ನಲ್ಲಿ ಮೈಲಿಗಟ್ಟಲೆ ಉದ್ದ ಗಡಿಯಲ್ಲಿ ಎರೆಡಾಳೆತ್ತರ
ಕಾಂಕ್ರೆಟ್ ಗೋಡೆಯನ್ನೇ ನಿರ್ಮಿಸುತ್ತದೆ.
ಇತ್ತ ಪ್ಯಾಲಸ್ತೈನ್ ನಲ್ಲಿ ಅಂತರ್ಯುದ್ದ ಶುರುವಾಗುತ್ತದೆ.
ಇಸ್ರೇಲ್ ಅಸ್ತಿತ್ವವನ್ನು ಒಪ್ಪಿಕೊಳ್ಳುವ ಅರಾಫಾತ್ ಪಕ್ಷದ ವಿರುದ್ದ – ಬಿಸಿರಕ್ತದ ಮುಸ್ಲಿಂ
ತರುಣರ – ಇಸ್ರೇಲ್ ಅನ್ನು ನಾಮಾವಶೇಷಮಾಡುವ ಉತ್ಸಾಹದ – ತೀವ್ರಉಗ್ರಗಾಮಿ ಸಂಘಟನೆ ‘ಹಮಾಸ್’
ಬಲಗೊಂಡು – ಪ್ಯಾಲಸ್ತೈನ್ (ಗಾಜಾ ಪಟ್ಟಿ) ಆಡಳಿತ ಹಮಾಸ್ ಕೈವಶವಾಗುತ್ತದೆ!!!
(ಲಷ್ಕರ್-ಎ-ತೊಯ್ಬಾದಂತಹ ಸಂಘಟನೆಗಳಿಗೆ
ಪಾಕಿಸ್ತಾನದ ಆಡಳಿತ ಸಿಕ್ಕರೆ ಹೇಗಾಗಬಹುದೆಂದು ಊಹಿಸಿಕೊಳ್ಳಿ). ಇಸ್ರೇಲ್ ತಲೆನೋವು ಮತ್ತೂ
ಹೆಚ್ಚಾಗುತ್ತದೆ. ಉಗ್ರಗಾಮಿ
ಸಂಘಟನೆ ಹಮಾಸ್ ನ ಕೈವಶವಾಗುವ ಗಾಜಾ ಪಟ್ಟಿ ಎಂದು ಕರೆಯಲ್ಪಡುವ ಪ್ರದೇಶ ಏನಂತಾ ವಿಸ್ತಾರವಾದ
ಪ್ರದೇಶವೇನಲ್ಲ. ಇಸ್ರೇಲಿನ ಪಶ್ಚಿಮಕ್ಕೆ, ಮೆಡಿಟರೇನಿಯನ್ ಸಮುದ್ರಕ್ಕೆ ತಾಗಿದಂತ,
ಭೂಪಟದಲ್ಲಿ ಒಂದು ಸ್ಕೇಲ್ ನ ಪಟ್ಟಿಯಂತೆ ಕಾಣುವ, ೪೦ ಕಿ.ಮೀ. ಉದ್ದ ಹಾಗು ಅಂದಾಜು ೬-೧೨ ಕಿ.ಮೀ. ಅಗಲದ ಚಿಕ್ಕ
ಭೂಪ್ರದೇಶ!!! ಆದರೆ ಜನಸಂಖ್ಯೆ ವಿಪರೀತ. ಅಂದಾಜು ಹದಿನಾರು ಲಕ್ಷ!!! ಅವರಲ್ಲಿ ಅರ್ದಕ್ಕರ್ದ ಜನ
ಇಸ್ರೇಲಿ ಮುನ್ನುಗ್ಗುವಿಕೆಗೆ ತಮ್ಮ ನೆಲೆ ಕಳೆದುಕೊಂಡ ನಿರಾಶ್ರಿತರು. ಸಹಜವಾಗಿಯೇ ಇಸ್ರೇಲಿಗರ
ಮೇಲೆ ದ್ವೇಷ ಕುದಿಯುತ್ತಿರುತ್ತದೆ. ಶ್ರೀಮಂತ ಮುಸ್ಲಿಂ ದೇಶಗಳಿಂದ ಹಣ ಹರಿದುಬರುತ್ತಿರುತ್ತದೆ.
ಇತ್ತ ನಿರುದ್ಯೋಗ ತಾಂಡವಾಡುತ್ತಿರುತ್ತದೆ. ಭಯೋತ್ಪಾದಕ ಉಗ್ರಗಾಮಿ ಸಂಘಟನೆಗಳು ಬೇರುಬಿಟ್ಟು
ಹೆಮ್ಮರವಾಗಲು ಇದಕ್ಕಿಂತ ಉತ್ತಮ ಕಾರಣಗಳಿವೆಯೇ? ಪರಿಣಾಮ – ಸದಾ ಇಸ್ರೇಲ್ ಮೇಲೆ ಆತ್ಮಾಹುತಿದಾಳಿ, ಅಪಹರಣ,
ರಾಕೆಟ್ ದಾಳಿ – ಇತ್ಯಾದಿ. ಇದಕ್ಕೆ ಗಾಜಾದಲ್ಲಿ ಈಗ ಆಡಳಿತದಲ್ಲಿ ಕೂತಿರುವ ‘ಹಮಾಸ್’ ನ
ಸಂಪೂರ್ಣ ಬೆಂಬಲ.
ಗಾಜಾಪಟ್ಟಿಯ ಒಂದುಕಡೆ ಮೆಡಿಟರೇನಿಯನ್ ಸಮುದ್ರ ಹಾಗೂ ಮತ್ತೆಲ್ಲಾಕಡೆ ಸುತ್ತಲೂ ಇಸ್ರೇಲ್ ಇದ್ದರೂ ಪಕ್ಕದ ಈಜಿಪ್ಟ್ ನೊಂದಿಗೆ ಎಂಟತ್ತು ಕಿಲೋಮೀಟರ್ ಗಳಷ್ಟು ಉದ್ದದ ಗಡಿಯನ್ನು ಹೊಂದಿದೆ. ನಾನು ಹೇಳಹೊರಟಿರುವ ಸುರಂಗಗಳು ಇರುವುದು ಆ ಗಡಿಯ ಕೆಳಗೇ. ಕಯ್ಯಲ್ಲಿ ಬಂದೂಕು ಹಾಗೂ ಧರ್ಮದ ಪಿತ್ತ ನೆತ್ತಿಗೆರಿರುವ ಪ್ಯಾಲಸ್ತೈನ್ ಉಗ್ರರನ್ನು ಈಜಿಪ್ಟ್ ಆಡಳಿತಗಾರರೂ ಸ್ವಲ್ಪ ದೂರವೇ ಇಟ್ಟಿದ್ದಾರೆ. (ಸುಯೆಜ್ ಕಾಲುವೆ ದಡದಲ್ಲಿರುವ ಈಜಿಪ್ಟ್ ಪ್ರವಾಸೀತಾಣಗಳ ಮೇಲೆ ಮುಸ್ಲಿಂ ಉಗ್ರರ ದಾಳಿ ನಡೆದಿತ್ತು. ಅಷ್ಟಲ್ಲದೇ ಈಜಿಪ್ಟ್ ತಮ್ಮ ಶತ್ರು ಇಸ್ರೇಲ್ ಜೊತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದುದು ಪ್ಯಾಲಸ್ತೈನ್ ನವರು ಹೇಗೆ ಸಹಿಸಿಯಾರು?). ಆದ್ದರಿಂದ ಈಜಿಪ್ಟ್ ಕೂಡ ತನ್ನ ಗಡಿಯನ್ನು (ಪ್ರವಾಸಿಗರ ಬರುವಿಕೆ ಹಾಗೂ ತೆರಳುವಿಕೆಗೆ ಒಂದು ಚೆಕ್ ಪೋಸ್ಟ್ ಬಿಟ್ಟು(ಜೇಬಲ್ಲಿ ದುಡ್ಡಿಟ್ಟುಕೊಂಡು ಓಡಾಡುವ ಪ್ರವಾಸಿಗರ ಕಿಮ್ಮತ್ತೆ ಅಂಥದ್ದು!!)) ಮುಚ್ಚಿದೆ!!! ಆದ್ದರಿಂದ ಪ್ಯಾಲಸ್ತೈನ್ ನವರ ದಿನನಿತ್ಯದ ಅಗತ್ಯತೆಗಳೂ ಸುರಂಗಗಳ ಮೂಲಕವೇ ಪುರೈಕೆಯಾಗಬೇಕು!!!!
ಸುರಂಗ ನಿರ್ಮಾಣ |
ನನ್ನ ಪ್ರತಿ ಬ್ಲಾಗ್ ಲೇಖನಗಳ ಕೊನೆಯಂತೆ ಈ ಲೇಖನದ್ದೂ. ಈ ಗಾಜಾಪಟ್ಟಿಯ ಕಳ್ಳಸಾಗಾಣಿಕಾ ಸುರಂಗಗಳ ಬಗ್ಗೆ, ಈ ವ್ಯವಹಾರ ವಹಿವಾಟಿನ ಬಗ್ಗೆ ನಿಮಗೆ ಗೊತ್ತಿತ್ತೆ? ಅಥವಾ ಈ ಲೇಖನದ ಮೂಲಕವೇ ಗೊತ್ತಾಗಿದ್ದೆ?? ನಿಮ್ಮಭಿಪ್ರಾಯಗಳಿಗೆ ಕಾತುರನಾಗಿದ್ದೇನೆ!!! ಕಾಮೆಂಟಿಸಿ. (ಕಾಮೆಂಟ್ ಮಾಡಲು ಪುರುಸೊತ್ತಿಲ್ಲದಿದ್ದರೆ +1 ರ ಮೇಲೆ ಕ್ಲಿಕ್ ಮಾಡಬಹುದು). ನಿಮ್ಮ ಕಾಮೆಂಟ್ ಗಳು ನಮ್ಮ ತಪ್ಪು ಒಪ್ಪುಗಳಿಗೆ ಕನ್ನಡಿ.